ಒಂದು


ಆದರೂ ಹೋದರೂ
ಎಲ್ಲಾ ದಂತಕಥೀ
ಇರುವವರ ಸ್ಥಿತೀ - ಗತೀ
ಮುಂಗಾಣದೋ !


ಇದ್ದದ್ದು ಇಲ್ಲದ್ದು
ಒಂದೇ ಮಾಡಬೇಡಾ
ಶುದ್ಧಿ ಇಲ್ಲದಾ ಸುದ್ಧಿ
ಬರಿದೋ ಅಶುದ್ಧೀ


ಮಾತಿನೊಳಗಿನ ಭಾವ
ಮೌನದೊಳಗಿನ ಜೀವಾ
ಅಂದದ್ದೆಲ್ಲಾ
ಚೆಂದಾ
ಹೇಗಾದೀತು ?

                                     - ದ. ರಾ. ಬೇಂದ್ರೆ 
                       ('ಬಾಲಬೋಧೆ' ಕವನ ಸಂಕಲನದಿಂದ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಉನ್ಮಾದದ ನಶೆ ನಮ್ಮೊಂದಿಗಿಷ್ಟು ಹಂಚಿಕೊಳ್ರಿ....